ಭಾರತದಲ್ಲಿ ಗೋಧಿ ಬೆಳೆ ಬಿತ್ತನೆ ಹೆಚ್ಚು: ಅನುಕೂಲಕರ ವಾತಾವರಣವಿದ್ದಲ್ಲಿ ಉತ್ತಮ ಇಳುವರಿಯ ನಿರೀಕ್ಷೆ
ಭಾರತದಲ್ಲಿ ಪ್ರಸಕ್ತ 2022ರಲ್ಲಿ ಗೋಧಿ ಉತ್ಪಾದನೆ ಉತ್ತಮವಾಗಿದ್ದು, ನಿರೀಕ್ಷೆಗೂ ಮೀರಿದ ಫಸಲು ಬರುವ ನಿರೀಕ್ಷೆಯಿದೆ. ಉತ್ತಮ ಮಳೆಯಿಂದಾಗಿ ಬಹುಕಾಲ ತೇವ ಭರಿತ ಮಣ್ಣಿನ ಪ್ರಭಾವದಿಂದ ಅಧಿಕ ಇಳುವರಿಯ ಸಾಧ್ಯತೆಯಿದೆ ಎನ್ನಲಾಗಿದೆ. ಗೋಧಿ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾದ ಭಾರತ, ಆಹಾರ ಧಾನ್ಯದ ವಿಚಾರದಲ್ಲಿ ಈ ವರ್ಷವೂ ಕೂಡ ನಿಶ್ಚಿಂತವಾಗಿರಲಿದೆ. ಇದು ಹಣ ರಫ್ತಿನ ಮೇಲಿನ ನಿರ್ಬಂಧ ನಿಷೇಧ ತೆಗೆದು ಹಾಕುವ ವಾದಕ್ಕೆ ಅಡ್ಡಿಯಾಗಲಿದ್ದು, ಚಿಲ್ಲರೆ ದರ ಏರಿಕೆ ಹಣದುಬ್ಬರದ ಆತಂಕವನ್ನು ದೂರಗೊಳಿಸಲಿದೆ.
ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ಸೇರಿದಂತೆ ಭಾರತದ ಉತ್ತರದ ರಾಜ್ಯಗಳಲ್ಲಿ ಗೋಧಿ ಬೆಳೆಯು ಸಾಂಪ್ರದಾಯಿಕ ಧಾನ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಇತ್ತೀಚೆಗೆ ಗೋಧಿ ದರ ಏರುಗತಿಯಲ್ಲಿ ಸಾಗಿದ್ದು, ಗುಜರಾತ್ ಹಾಗೂ ರಾಜಸ್ತಾನದಂತಹ ರಾಜ್ಯಗಳಲ್ಲಿ ಗೋಧಿ ದರ ಅಧಿಕವಾಗಿದೆ ಎಂದು ಓಲಂ ಆಗ್ರೋ ಇಂಡಿಯಾದ ಉಪಾಧ್ಯಕ್ಷರಾದ ನಿತಿನ್ ಗುಪ್ತಾ ತಿಳಿಸಿದ್ದರು.
ಪ್ರಸಕ್ತ 2022ರ ವರ್ಷದ ಇದುವರೆಗಿನ ದೇಶೀಯ ಗೋಧಿ ಬೆಲೆ 33% ರಷ್ಟು ಏರಿದೆ. ಪ್ರತಿ ಟನ್ಗೆ ದಾಖಲೆಯ 29,000 ರೂ. ನಷ್ಟು ಏರಿಕೆ ಕಂಡಿದೆ. ಗೋಧಿ ರಫ್ತು ಮೇಲಿನ ನಿಷೇಧದ ನಡುವೆಯೂ ಗೋಧಿ ದರ ಏರಿಕೆಯಾಗಿರುವುದು ಚಿಲ್ಲರೆ ವ್ಯಾಪಾರಿ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.
ಭಾರತವು ವರ್ಷಕ್ಕೆ ಒಮ್ಮೆ ಮಾತ್ರ ಗೋಧಿ ಬೆಳೆ ಬೆಳೆಯುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗೋಧಿ ಬಿತ್ತನೆಯಾದರೆ ಮರು ವರ್ಷದ ಮಾರ್ಚ್ ವೇಳೆಗೆ ಧಾನ್ಯವನ್ನು ಕೊಯ್ಲು ಮಾಡಲಾಗುತ್ತದೆ. ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಬಿತ್ತನೆಯ ಋತುವಿನಲ್ಲಿ ಅಕ್ಟೋಬರ್ 1 ರಿಂದ ಇದುವರೆಗೆ ದೇಶದಲ್ಲಿ ಸುಮಾರು 15.3 ಮಿಲಿಯನ್ ಹೆಕ್ಟೇರ್ಗಳಲ್ಲಿ ರೈತರು ಗೋಧಿ ಬೆಳೆ ಬೆಳೆದಿದ್ದಾರೆ. ಇದು ಕಳೆದ ವರ್ಷಕ್ಕಿಂತಲೂ ಸುಮಾರು 11% ನಷ್ಟು ಅಧಿಕ ಎಂದು ತಿಳಿದು ಬಂದಿದೆ.
ಗೋಧಿ ಆಹಾರ ಧಾನ್ಯಕ್ಕೆ ವಿಶ್ವದ ಎರಡನೇ ಅತಿ ದೊಡ್ಡ ಗ್ರಾಹಕ ರಾಷ್ಟ್ರವೂ ಭಾರತವಾಗಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಕೊರತೆಯಿಂದ, ಜಾಗತಿಕ ಮಾರುಕಟ್ಟೆಗೆ ತಕ್ಕಮಟ್ಟಿನ ಗೋಧಿ ಪೂರೈಕೆ ಹಾಗೂ ಸ್ಥಳಿಯ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಫ್ತಿನ ಮೇಲೆ ನಿರ್ಬಂಧ ಹೇರಿತು. ಅಲ್ಲದೇ ಗೋಧಿ ಬೆಳೆಗೆ ಮಾರಕವಾಗಿದ್ದ ತಾಪಮಾನದ ಏರಿಕೆ ಹಾಗೂ ದಿಢೀರ್ ವಾತಾವರಣ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಆಹಾರ ಸಚಿವಾಲಯದ ಮೂಲಗಳು ತಿಳಿಸಿವೆ.
ಸಧ್ಯ ದೇಶದಲ್ಲಿ ಗೋಧಿ ಬೆಳೆದ ಭೂಪ್ರದೇಶವು ಹೆಚ್ಚಾಗಿದ್ದು, ಈ ಬೆಳೆಗೆ ಮುಂದಿನ ವಾರಗಳಲ್ಲಿ ಕಡಿಮೆ ತಾಪಮಾನ ಅತೀ ಅಗತ್ಯವಾಗಿದೆ. ಮುಖ್ಯವಾಗಿ ಗೋಧಿ ಬೆಳೆ ಇನ್ನೇನು ಕೈಗೆ ಬರುತ್ತದೆ ಎನ್ನುವ ಕೆಲವು ದಿವಸಗಳು ವಾತಾವರಣ ಅನುಕೂಲವಾಗಿರಲೇಬೇಕು. ಹೀಗಿದ್ದರೆ ಮಾತ್ರ ಈ ವರ್ಷ ಉತ್ತಮ ಇಳುವರಿಯನ್ನು ನಿರೀಕ್ಷಿಸಬಹುದು ಎನ್ನುವುದು ಗೋಧಿ ಬೆಳೆಗಾರರ ಅಭಿಪ್ರಾಯ.
ಇದನ್ನು ಓದಿ… ಭಾರತದಲ್ಲಿ ಗೋಧಿ ಬೆಳೆ ಬಿತ್ತನೆ ಹೆಚ್ಚು: ಅನುಕೂಲಕರ ವಾತಾವರಣವಿದ್ದಲ್ಲಿ ಉತ್ತಮ ಇಳುವರಿಯ ನಿರೀಕ್ಷೆ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ