Articles Category

ರೈತರಿಂದಲೇ ಕಮಿಷನ್‌ ಪಡೆಯುತ್ತಿದ್ದಾರೆ ವರ್ತಕರು, ರೈತ ಪರ ಸರ್ಕಾರ ಎಲ್ಲಿದೆ?

Farmers cumission

ರೈತರಿಂದಲೇ ಕಮಿಷನ್‌ ಪಡೆಯುತ್ತಿದ್ದಾರೆ ವರ್ತಕರು, ರೈತ ಪರ ಸರ್ಕಾರ ಎಲ್ಲಿದೆ?

ರೈತರು ಕೃಷಿ ಉತ್ಪನ್ನಗಳನ್ನು ಸೂಕ್ತವಾಗಿ ಮಾರಾಟ ಮಾಡಲೆಂದೇ ನಿರ್ಮಿತವಾಗಿರುವ ಎಪಿಎಂಸಿಗಳಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಅದರಲ್ಲೂ ಗದಗ ಜಿಲ್ಲೆಯ ಮಾರುಕಟ್ಟೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಶೋಷಣೆಯಾಗುತ್ತಿದೆ ಎಂದು ವರದಿಯಾಗಿದ್ದು, ಅಧಿಕಾರಿಗಳು ರೈತರಿಗೆ ನೆರವಾಗುವ ಬದಲು ಪರೋಕ್ಷವಾಗಿ ದಲ್ಲಾಳಿಗಳು ಹಾಗೂ ವರ್ತಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ರೈತರ ಆಕ್ಷೇಪವಾಗಿದೆ.

ಕೃಷಿ ಉತ್ಪನ್ನಗಳನ್ನು ರೈತರು ಮಾರಾಟಕ್ಕೆಂದು ತಂದ ಸಂದರ್ಭದಲ್ಲಿ, ಎಪಿಎಂಸಿ ಆವರಣದಲ್ಲಿರುವ ವರ್ತಕರು ರೈತರಿಂದ ಯಾವುದೇ ರೀತಿಯ ಕಮಿಷನ್ ಅಥವಾ ದುಡ್ಡನ್ನು ಪಡೆಯುವಂತಿಲ್ಲ. ಇದು ಎಪಿಎಂಸಿ ಕಾಯ್ದೆ 1956 ಪ್ರಕಾರ ನಿಷೇಧವಾಗಿದೆ, ಆದರೂ ಗದಗ ಮಾರುಕಟ್ಟೆಯಲ್ಲಿ ರೈತರಿಂದ ಕಾಳು, ಕಡಿಗಳಿಗೆ 2%, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿಗೆ 3% ನಷ್ಟು, ಹಾಗೂ ನಿತ್ಯವೂ ಬೇಕಾಗುವ ತರಕಾರಿಗೆ 5%ನಷ್ಟು ಕಮಿಷನ್‌ ಪಡೆಯುತ್ತಿದ್ದಾರೆ.

ಎಪಿಎಂಸಿ ಕಾಯ್ದೆಯ ಪ್ರಕಾರ ಈ ಕಮಿಷನ್‌ನ್ನು ಕೇವಲ ಖರೀದಿದಾರರಿಂದ ಮಾತ್ರ ಪಡೆಯಲು ಅವಕಾಶವಿದ್ದು, ಯಾವುದೇ ಕಾರಣಕ್ಕೂ ರೈತರಿಂದ ಪಡೆಯುವಂತಿಲ್ಲ. ಈ ರೀತಿಯ ಕಾನೂನು ಫಲಕಗಳನ್ನು ಅಧಿಕಾರಿಗಳು ಎಪಿಎಂಸಿ ಆವರಣದಲ್ಲಿ ಅಳವಡಿಸಿ ಕೈತೊಳೆದುಕೊಂಡಿದ್ದಾರೆ. ಆದರೆ ಅದರ ಪಾಲನೆಗೆ ಮಾತ್ರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ನಿತ್ಯವೂ ಬಡ ಹಾಗೂ ಮಧ್ಯಮ ವರ್ಗದ ರೈತರು ಕಮಿಷನ್‌ ರೂಪದಲ್ಲಿ ವರ್ಷವಿಡೀ ಶ್ರಮಪಟ್ಟು ದುಡಿದ ಹಣವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುವಂತಾಗಿದೆ.

ಈರುಳ್ಳಿ ಹಾಗೂ ಮೆಣಸಿನಕಾಯಿ ಮಾರಾಟಕ್ಕೆ ಹೆಸರುವಾಸಿಯಾಗಿರುವ ಗದಗ ಮಾರುಕಟ್ಟೆಗೆ ಬರುವ ರೈತರಿಂದ ಸಹ ಕನಿಷ್ಠ 2%,  ಗರಿಷ್ಠ 5% ನಷ್ಟು ಕಮಿಷನ್‌ ಪಡೆಯುತ್ತಾರೆ. ಇದೇ ರೀತಿ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸುವವರಿಂದ ಕೂಡ ಇದೇ ಪ್ರಮಾಣದ ಕಮಿಷನ್‌ ಪಡೆಯುವ ರೂಢಿ ಗದಗ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಚಾಲನೆಯಲ್ಲಿದೆ. ಇದು ಕಾನೂನು ರೀತ್ಯಾ ಅಪರಾಧವಾಗಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಎಗ್ಗಿಲ್ಲದೇ ನಡೆಯುತ್ತಿದೆ.

ರೈತರ ಯುವಕರಿಗೆ ಮದುವೆಗೆ ವಧು ಸಿಗುತ್ತಿಲ್ಲ: ತಹಶೀಲ್ದಾರ್​​ಗೆ ಗ್ರಾಮಸ್ಥರಿಂದ ಮನವಿ.!

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *