Important Information For Farmers ರೈತರೇ ಇಲ್ಲಿದೆ ನೋಡಿ ನೀವು ತಿಳಿಯಲೇಬೇಕಾದ ಮಹತ್ವದ ಮಾಹಿತಿ:
ಕೇಂದ್ರ ಸರ್ಕಾರ ರೈತರನ್ನು ಸದೃಡಗೊಳಿಸಲು, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ. ಆದರೆ, ಬಹಳಷ್ಟು ರೈತರಿಗೆ ಅವುಗಳ ಬಗ್ಗೆ ತಿಳಿದೇ ಇಲ್ಲ ಎನ್ನುವುದು ಬೇಸರದ ಸಂಗತಿ. ಮಾಹಿತಿಯೇ ಇಲ್ಲದ ಕಾರಣ ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತರ ಹಿತಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕೆಲವು ಪ್ರಮುಖ ಯೋಜನೆಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡ್ತೇವೆ, ದಯವಿಟ್ಟು ಈ ಯೋಜನೆಗಳ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡೆದುಕೊಳ್ಳಿ.
1.ಪ್ರಧಾನ ಮಂತ್ರಿ ಜನಧನ್ ಯೋಜನೆ. (Pradhan Mantri Jan Dhan Yojana)
2014ರ ಆಗಸ್ಟ್ 28ರಂದು ಪ್ರಧಾನಮಂತ್ರಿ ಜನಧನ್ ಸರ್ಕಾರ್ ಯೋಜನೆ ಜಾರಿಗೆ ಬಂದಿದ್ದು, ಈ ಯೋಜನೆ ಭಾರತದಲ್ಲಿ ನೆಲೆಸಿರುವ ಬಡ ನಾಗರೀಕರಿಗಾಗಿಯೇ ಲಭ್ಯವಿದೆ. ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲದವರು, ಈ ಯೋಜನೆಯಡಿಯಲ್ಲಿ ಖಾತೆ ತೆರೆಯಬಹುದು. ಈ ಯೋಜನೆಯಡಿಯಲ್ಲಿ ದೇಶದ ಯಾವುದೇ ವ್ಯಕ್ತಿಯೂ ಬ್ಯಾಂಕ್ ಖಾತೆ ತೆರೆಯಲು ಅವಕಾಶವಿದೆ. ಈ ಯೋಜನೆಯ ಮುಖ್ಯ ಗುರಿಯೇನೆಂದರೆ ದೇಶದಲ್ಲಿ ಆರ್ಥಿಕ ಸಧೃಡದೆಯನ್ನ ತರುವುದು. ಜನಧನ್ ಯೋಜನೆಯಲ್ಲಿ ಜನರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವುದರ ಜೊತೆಗೆ ಸರಕಾರದ ಯೋಜನೆಗಳ ಲಾಭವನ್ನು ನೇರವಾಗಿ ಅವರಿಗೆ ತಲುಪಿಸುವುದೇ ಸರಕಾರದ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಜನ-ಧನ್ ಯೋಜನೆಯಲ್ಲಿ ಬ್ಯಾಂಕಿಂಗ್ ಉಳಿತಾಯ ಖಾತೆ ಹಾಗೂ ಠೇವಣಿ ಖಾತೆ, ಸಾಲ, ವಿಮೆ, ಪಿಂಚಣಿಯಂತಹ ಖಾತೆಗಳನ್ನ ತೆರೆಯುವ ಮೂಲಕ ವಿವಿಧ ರೀತಿಯಲ್ಲಿ ಹಣಕಾಸು ಸೇವೆಗಳನ್ನ ಸರ್ಕಾರ ಒದಗಿಸುತ್ತದೆ. ಯಾವುದೇ ಬ್ಯಾಂಕ್ ಶಾಖೆ ಅಥವಾ ವ್ಯವಹಾರ ಪ್ರತಿನಿಧಿ (ಬ್ಯಾಂಕ್ ಮಿತ್ರ) ಯಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದ್ದು, ಸರ್ಕಾರದ ಈ ಯೋಜನೆಯಲ್ಲಿ ಖಾತೆಯನ್ನು ಮುಕ್ತ ಬ್ಯಾಲೆನ್ಸ್ ನೊಂದಿಗೆ ತೆರೆಯಬಹುದು. ಒಂದು ವೇಳೆ ನೀವು ಈ ಯೋಜನೆಯನ್ನು ಬಿಟ್ಟು ಸ್ವತಂತ್ರವಾಗಿ ಯಾವುದೇ ಬ್ಯಾಂಕಿನಲ್ಲಿ ಖಾತೆ ತೆರೆಯಲು ಬಯಸಿದರೆ, ಆಗ 1000 ಅಥವಾ 500 ಹೀಗೆ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಆದರೆ, ಈ ಜನ್ ಧನ್ ಖಾತೆಯಡಿಯಲ್ಲಿ ನೀವು ಬ್ಯಾಂಕ್ ಖಾತೆ ತೆರೆದರೆ, ಯಾವುದೇ ಶುಲ್ಕವನ್ನ ಪಾವತಿಸಬೇಕಾಗಿಲ್ಲ. ಈಗಾಗಲೇ ಈ ಯೋಜನೆಯಡಿಯಲ್ಲಿ ಸುಮಾರು 11 ಕೋಟಿ ಜನರು ಖಾತೆ ತೆರೆದಿದ್ದಾರೆ!
2.ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ… (Pradhan Mantri Kisan Maan Dhan Yojana)
ನಿವೃತ್ತಿಯ ನಂತರ ರೈತರಿಗೂ ಪಿಂಚಣಿ ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರವು ನಿರ್ವಹಿಸುತ್ತಿದೆ. ಈ ಯೋಜನೆಯಲ್ಲಿ ರೈತರಿಗೆ 60 ವರ್ಷ ವಯಸ್ಸಿನ ನಂತರ ಕನಿಷ್ಠ 3000 ರೂ. ದೊರೆಯುತ್ತದೆ. ಈ ಯೋಜನೆಯಡಿ 18 ರಿಂದ 40 ವರ್ಷದೊಳಗಿನ ರೈತರು ಪಿಎಂ ಕಿಸಾನ್ ಮನ್ ಧನ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ಅರ್ಜಿದಾರ ರೈತರು 60 ವರ್ಷದವರೆಗೆ ಪ್ರತಿ ತಿಂಗಳು 55 ರಿಂದ 200 ರೂಪಾಯಿ ಹೂಡಿಕೆ ಮಾಡಬಹುದು. 60 ವರ್ಷ ವಯಸ್ಸಿನ ನಂತರ ಈ ಯೋಜನೆಯಡಿ ರೈತರಿಗೆ ತಿಂಗಳಿಗೆ ಕನಿಷ್ಠ ಮೂರು ಸಾವಿರ ರೂಪಾಯಿ ಪಿಂಚಣಿ ದೊರಕುತ್ತದೆ. ಈ ಪಿಂಚಣಿ ನಿಧಿಯನ್ನ ಭಾರತೀಯ ಜೀವ ವಿಮಾ ನಿಗಮ ಎಂದರೆ ಎಲ್ ಐಸಿ ನಿರ್ವಹಿಸುತ್ತಿದ್ದು, ಗರಿಷ್ಠ ಎರಡು ಹೆಕ್ಟೇರ್ ವರೆಗೆ ಸಾಗುವಳಿ ಯೋಗ್ಯ ಭೂಮಿ ಹೊಂದಿರುವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಒಂದು ವೇಳೆ 18ನೇ ವಯಸ್ಸಿನಲ್ಲಿ ನೀವು ಯೋಜನೆಗೆ ನೋಂದಾಯಿಸಿಕೊಂಡರೆ, ಮಾಸಿಕ ವಂತಿಗೆ ಪ್ರತಿ ತಿಂಗಳು 55 ರೂ. ಕೊಡಬೇಕು. ಈ ಯೋಜನೆಯಲ್ಲಿ ನೋಂದಾಯಿತನಾಗಿರುವ ರೈತ ಸತ್ತರೆ ರೈತನ ಪತ್ನಿಗೆ ಕುಟುಂಬ ಪಿಂಚಣಿಯಾಗಿ 50% ನಷ್ಟು ಪಿಂಚಣಿ ಹಣ ದೊರಕುತ್ತದೆ.
ಇನ್ನು, ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು https://maandhan.in ಈ ವೆಬ್ ಸೈಟ್ ಗೆ ಭೇಟಿ ನೀಡಿ
ಇದನ್ನು ಓದಿ… Farmers Day : ರೈತರ ದಿನ ಆಚರಣೆಯ ಇತಿಹಾಸ ಉದ್ದೇಶ ಹಾಗೂ ಮಹತ್ವ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ