ಕೇವಲ ಒಂದು ಎಕರೆ ಜಾಗದಲ್ಲಿ ಸುಮಾರು 8 ಲಕ್ಷ ಆದಾಯ ತೆಗೆಯುವ ರೈತ ಬಾಬು ಸಾಬ್
ರೈತ ಚಾಬೂ ಸಾಬ್ – ಚಾಬೂ ಸಾಬ್ ಎನ್ನುವ ವ್ಯಕ್ತಿಯೊಬ್ಬರು ಮನೆಯ ಮುಂಭಾಗದ ಒಂದು ಎಕರೆಯಷ್ಟು ಜಾಗದಲ್ಲಿ ಅಡಿಕೆ ತೋಟವನ್ನು ನಿರ್ಮಿಸಿದ್ದು, ಇದರಲ್ಲಿ ಸುಮಾರು 800 ಅಡಿಕೆ ಮರಗಳಿವೆ. ಆದರೆ ತೋಟಕ್ಕೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದ ಕಾರಣ, ತೆರೆದ ಬಾವಿಯಿಂದಲೇ ನೀರು ಸೇದಿ ಪ್ರತಿ ಅಡಿಕೆ ಮತ್ತು ತೆಂಗಿನ ಗಿಡಗಳಿಗೆ ನೀರುಣಿಸುತ್ತಿದ್ದರು. ಹೀಗೆ ಗಿಡ ನೆಟ್ಟು ಸುಮಾರು ಎರಡು ವರ್ಷಗಳ ನಂತರವೇ ಕೊಳವೆ ಬಾವಿ ತೆಗೆಸಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡರು.
ಅಡಿಕೆ ಮರಗಳ ನಡುವೆ ಸುಮಾರು 800 ಗೊಬ್ಬರದ ಗಿಡಗಳನ್ನು ಕೂಡ ನೆಟ್ಟಿದ್ದಾರೆ, ಈಗಿಡಗಳಿಗೆ ಕಾಳು ಮೆಣಸಿನ ಬಳ್ಳಿಯನ್ನು ಹಬ್ಬಿಸಿದ್ದಾರೆ. ಈ ಫಣಿಯೂರು ಮತ್ತು ಕರಿಮುಂಡ ತಳಿಯ ಮೆಣಸಿನ ಬಳ್ಳಿಗಳ ವಯಸ್ಸು ಸುಮಾರು 12 ವರ್ಷ. ಪ್ರತಿ ಬಳ್ಳಿಯಿಂದ ವರ್ಷಕ್ಕೆ ಸರಿಸುಮಾರು 2 ರಿಂದ 2.5 ಕಿಲೋ ಗ್ರಾಂ. ಕಾಳು ಮೆಣಸಿನಂತೆ, ವರ್ಷಕ್ಕೆ ಸುಮಾರು 18 ಕ್ವಿಂಟಾಲ್ ಫಸಲು ಸಿಗುತ್ತಿದೆ. ಕೇವಲ ಇದರಿಂದಲೇ ವರ್ಷಕ್ಕೆ ಸರಿಸುಮಾರು 7 ಲಕ್ಷ ರೂಪಾಯಿ ಆದಾಯ ದೊರೆಯುತ್ತದೆ. ಗೊಬ್ಬರ, ನೀರಾವರಿ ವ್ಯವಸ್ಥೆ, ಔಷಧ ಸಿಂಪಡಣೆ, ಕೂಲಿ ನಿರ್ವಹಣೆ ಮುಂತಾದ ಎಲ್ಲ ವಿವರಗಳ ಬಗ್ಗೆ ಲೆಕ್ಕ ಹಾಕಿದರೂ, ಕಾಳು ಮೆಣಸಿನ ಕೃಷಿಯಿಂದ ವರ್ಷಕ್ಕೆ ಅಂದಾಜು ಒಂದು ಲಕ್ಷ ಖರ್ಚು ಬರಬಹುದೆಂದು ಲೆಕ್ಕ ಹಾಕಿದರೂ, 6 ಲಕ್ಷ ರೂ. ಲಾಭ ದೊರೆಯುತ್ತದೆ.
ಇವರ ಅಡಿಕೆ ಮರಗಳಿಗೆ ಈಗ ಸುಮಾರು 15 ವರ್ಷ ವಯಸ್ಸಾಗಿದ್ದು, ಇದರಿಂದ ವಾರ್ಷಿಕ ಆದಾಯ ಸರಾಸರಿ 3 ಲಕ್ಷ ರೂ. ಗಳು. ಇದರ ಖರ್ಚು ಸುಮಾರು 1.5 ಲಕ್ಷ ಎಂದು ಲೆಕ್ಕ ಹಾಕಿದರೂ, 2.5 ಲಕ್ಷ ಲಾಭವಂತೂ ಖಚಿತ. ಅಲ್ಲದೇ ಪ್ರತಿ ವರ್ಷ ಸುಮಾರು 2 ಸಾವಿರ ಅಡಿಕೆ ಸಸಿ ಹಾಗೂ 2 ಸಾವಿರ ಕಾಳು ಮೆಣಸಿನ ಬಳ್ಳಿಗಳ ನರ್ಸರಿ ಗಿಡಗಳನ್ನೂ ಇವರು ತಯಾರಿಸುತ್ತಾರೆ. ಇವುಗಳನ್ನು ಕಡಿಮೆ ದರದಲ್ಲಿ, ಬಡ ರೈತರಿಗೆ ಮಾರಾಟಮಾಡಲು ನಿರ್ಧರಿಸಿದ್ದಾರೆ. ಜಾಬೂ ಸಾಬ್ ಅವರ ಇನ್ನೊಂದು ವಿಶೇಷತೆಯೆಂದರೆ, ಅಡಿಕೆ ಹಾಗೂ ಕಾಳು ಮೆಣಸಿನ ಬೆಳೆಗೆ ಸಗಣಿ, ಕುರಿ ಗೊಬ್ಬರವನ್ನು ಮಾತ್ರ ಬಳಸುವುದು. ಅಲ್ಲದೇ, ಸುಮಾರು ಐವತ್ತು ಮಾವು, ಇಪ್ಪತ್ತು ನಿಂಬು, ಐವತ್ತು ತೆಂಗು, ನೂರು ಬಾಳೆ ಗಿಡಗಳೂ ಇವರ ಕೃಷಿ ಜಮೀನಿನಲ್ಲಿ ಜಾಗ ಪಡೆದುಕೊಂಡಿವೆ. ಹೀಗೆ, ಮಿಶ್ರ ಕೃಷಿ ಪದ್ಧತಿಯಿಂದ ಜಾಬೂ ಸಾಬ್ ಕೇವಲ ಒಂದು ಎಕರೆ ಜಾಗದಲ್ಲಿ ಕೃಷಿ ಮಾಡಿದರೂ ಸುಮಾರು ಲಕ್ಷಗಳ ಆದಾಯ ಪಡೆಯಬಹುದು ಎನ್ನುವುದನ್ನು ಎಲ್ಲರಿಗೂ ಸಾಧಿಸಿ ತೋರಿಸಿದ್ದಾರೆ.
ಇದನ್ನು ಓದಿ… ಭಾರತದಲ್ಲಿ ಗೋಧಿ ಬೆಳೆ ಬಿತ್ತನೆ ಹೆಚ್ಚು: ಅನುಕೂಲಕರ ವಾತಾವರಣವಿದ್ದಲ್ಲಿ ಉತ್ತಮ ಇಳುವರಿಯ ನಿರೀಕ್ಷೆ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ