Uncategorized

Pradhan Mantry Kisan Yojana ಪ್ರಧಾನಮಂತ್ರಿ ಕಿಸಾನ್ 13ನೇ ಕಂತು ಬಿಡುಗಡೆ, ಯೋಜನೆಯ ಲಾಭ ಪಡೆಯಲು ಈ ಕೂಡಲೇ ಇಕೈವೈಸಿ ನವೀಕರಣ ಮಾಡಿಕೊಳ್ಳಿ.

ekyc for farmers

Pradhan Mantry Kisan Yojana ಪ್ರಧಾನಮಂತ್ರಿ ಕಿಸಾನ್ 13ನೇ ಕಂತು ಬಿಡುಗಡೆ, ಯೋಜನೆಯ ಲಾಭ ಪಡೆಯಲು ಈ ಕೂಡಲೇ ಇಕೈವೈಸಿ ನವೀಕರಣ ಮಾಡಿಕೊಳ್ಳಿ.

ಪ್ರಧಾನಮಂತ್ರಿ ಕಿಸಾನ್ ಯೋಜನೆಯ 13 ನೇ ಕಂತಿನ ಲಾಭ ಪಡೆಯಲು ರೈತ ಬಾಂಧವರು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಏಕೆಂದರೆ ಪ್ರತಿಯೊಬ್ಬ ಫಲಾನುಭವಿಯ ಖಾತೆಗೂ 2000 ರೂ. ಗಳನ್ನು ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತದ ಕೇಂದ್ರ ಕೃಷಿ ಸಚಿವರು ಈಗಾಗಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಯೋಜನೆ 2022 ರಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳೂ, 13 ನೇ ಕಂತು 2022 ರ ಇತ್ತೀಚಿನ ಮಾಹಿತಿ ಹಾಗೂ ಅಪ್ಡೇಟ್ ತಿಳಿಯಲು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಬಹುದು. ಪೋರ್ಟಲ್ ಕ್ಲೋಸ್ ಆಗುವ ಮುನ್ನ, ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸದಿರುವವರು ಪೂರ್ಣಗೊಳಿಸಬಹುದು.

ಹೌದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13ನೇ ಕಂತು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳು ಈ ಕೂಡಲೇ eKYC) ನವೀಕರಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಅರ್ಹ ಫಲಾನುಭವಿ ರೈತರು ಕೇಂದ್ರ ಸರ್ಕಾರದ 2,000 ರೂ. ಕೃಷಿ ಸಹಾಯಧನದ 12ನೇ ಕಂತನ್ನು ಈಗಾಗಲೇ ಪಡೆದಿದ್ದಾರೆ. ಅದೇ ರೀತಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ 2000 ರೂ. ಪಡೆಯಲು eKYC ನವೀಕರಣ ಮಾಡಿಸಬೇಕು.

ಯೋಜನೆಯ ಫಲಾನುಭವಿಗಳಾಗ ಬಯಸುವ ರೈತ ಬಾಂಧವರು ಡಿಸೆಂಬರ್ ಒಳಗೆ, ಅಂದರೆ ನವೆಂಬರ್ 30 ರೊಳಗೆ ಇಕೆವೈಸಿ ಭರ್ತಿ ಮಾಡಬೇಕು, ಇಲ್ಲವಾದರೆ 13ನೇ ಕಂತಿನ ಹಣ ದೊರಕುವುದಿಲ್ಲ ಎಂದು ಸೂಚಿಸಲಾಗಿದೆ. ಆದ್ದರಿಂದ ಅರ್ಹ ರೈತ ಬಾಂಧವರು ಕೂಡಲೇ ಯೋಜನೆಗೆ ಅಗತ್ಯವಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ ಫಲಾನುಭವಿಗಳ ಅರ್ಜಿ ನಮೂನೆಯು ಅಪೂರ್ಣವಾಗಿದ್ದರೆ, ಅವರು ಪ್ರೋತ್ಸಾಹಧನ ಪಡೆಯುವಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಇದನ್ನು ಓದಿ…. ರೈತ ಬಾಂಧವರೇ ಗಮನಿಸಿ: ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅನರ್ಹವಾದ ಫಲಾನುಭವಿಗಳ ಪಟ್ಟಿ ಬಿಡುಗಡ

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *