Uncategorized

ರಾಮನಗರ ಜಿಲ್ಲೆ​ಯಲ್ಲಿ ವಿದ್ಯಾನಿಧಿ ಯೋಜನೆಯ ಲಾಭ ಪಡೆದ 12,526 ರೈತರ ಮಕ್ಕಳು

vidhyanidhi yojana

ರಾಮನಗರ ಜಿಲ್ಲೆ​ಯಲ್ಲಿ ವಿದ್ಯಾನಿಧಿ ಯೋಜನೆಯ ಲಾಭ ಪಡೆದ 12,526 ರೈತರ ಮಕ್ಕಳು

ವಿದ್ಯಾನಿಧಿ ಯೋಜನೆ : ರಾಜ್ಯ ಸರ್ಕಾ​ರದ ಅತ್ಯಂತ ಮಹ​ತ್ವ​ಕಾಂಕ್ಷಿ ‘ಮುಖ್ಯ​ಮಂತ್ರಿ ರೈತ ವಿದ್ಯಾ​ನಿಧಿ ಯೋಜ​ನೆ’ 2021-22ನೇ ಸಾಲಿ​ನಲ್ಲಿ ರಾಮನಗರ ಜಿಲ್ಲೆ​ಯಲ್ಲಿ ಇದುವ​ರೆಗೂ 12,526 ವಿದ್ಯಾ​ರ್ಥಿ​ಗ​ಳ ಖಾತೆಗೆ 4.98 ಕೋಟಿ ರೂ. ಶಿಷ್ಯ ವೇತನ ಜಮೆ ಮಾಡ​ಲಾ​ಗಿದೆ. ರೈತರ ಮಕ್ಕ​ಳ ಹೆಚ್ಚಿನ ಮತ್ತು ಉನ್ನತ ಶಿಕ್ಷಣ ಪ್ರೋತ್ಸಾ​ಹಿ​ಸಲು ಆರ್ಥಿ​ಕ​ವಾಗಿ ನೆರ​ವಾ​ಗುವ ಉದ್ದೇ​ಶ​ದಿಂದ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿಯವರು ಇತ್ತೀ​ಚೆಗೆ ಹೊಸ ಶಿಷ್ಯ ವೇತನ ಮುಖ್ಯ​ಮಂತ್ರಿ ರೈತ ವಿದ್ಯಾ​ನಿಧಿ ಯೋಜ​ನೆ​ಯನ್ನು ಅನು​ಷ್ಠಾ​ನ​ಗೊ​ಳಿ​ಸಿ​ದ್ದರು.

ಈಗಾಗಲೇ ಜಿಲ್ಲೆ​ಯಲ್ಲಿ ಈ ಯೋಜ​ನೆಗೆ ಉತ್ತಮ ಪ್ರತಿ​ಕ್ರಿಯೆ ವ್ಯಕ್ತ​ವಾ​ಗಿದ್ದು, ವಿದ್ಯಾ​ರ್ಥಿ​ಗಳು ಶಿಷ್ಯ ವೇತನ ಕೋರಿ ಆನ್‌ ಲೈನ್‌ ನಿಗದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿ​ಸು​ತ್ತಿ​ದ್ದಾರೆ. ಈವರೆಗೂ ಮೊದ​ಲನೇ ಹಂತ​ದಲ್ಲಿ 12,526 ವಿದ್ಯಾ​ರ್ಥಿ​ಗ​ಳಿಗೆ 4,98,28,000 ರೂ. ಶಿಷ್ಯ ವೇತ​ನ​ವನ್ನು ಕಲ್ಪಿ​ಸ​ಲಾ​ಗಿದೆ. ಫಲಾ​ನು​ಭ​ವಿ​ಗಳ ಬ್ಯಾಂಕ್‌ ಖಾತೆಗೆ ನೇರ​ವಾಗಿ ಹಣ ಜಮೆ​ಯಾಗುತ್ತಿದ್ದು, ದ್ವಿತೀಯ ಪಿಯುಸಿಗೆ ದಾಖ​ಲಾ​ಗು​ತ್ತಿ​ದ್ದಂತೆಯೇ ಕಾಲೇ​ಜು​ಗ​ಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಆಯಾ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿ​ಸ​ಲಾ​ಗಿದೆ. ವಿದ್ಯಾ​ರ್ಥಿ​ಗ​ಳಿಗೆ ತಲಾ 2,500 ರೂ. ಹಾಗೂ ವಿದ್ಯಾ​ರ್ಥಿ​ನಿ​ಯ​ರಿಗೆ 3,000 ರೂ. ನೀಡ​ಲಾ​ಗಿದೆ.

ಈ ಯೋಜ​ನೆಯು ಮುಂದು​ವ​ರೆ​ದಿದ್ದು ಆನ್‌ ಲೈನ್‌ ನಲ್ಲಿ ನೋಂದಣಿ ಮಾಡಿ​ಕೊ​ಳ್ಳ​ಬ​ಹು​ದು, ವಿದ್ಯಾ​ರ್ಥಿಯ ಪೋಷಕರಿಗೆ ಜಮೀನು ಇದೆಯೋ ಇಲ್ಲವೋ ಎನ್ನು​ವು​ದನ್ನು ಖಚಿತಪಡಿಸಿಕೊಂಡು ನಂತರ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಪುನ​ರಾ​ವ​ರ್ತಿತ ವಿದ್ಯಾ​ರ್ಥಿ​ಗಳು ಅರ್ಹರಾ​ಗಿ​ರು​ವು​ದಿಲ್ಲ ಎನ್ನು​ತ್ತಾರೆ ಕೃಷಿ ಇಲಾಖೆ ಅಧಿ​ಕಾ​ರಿ​ಗ​ಳು. ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾ​ಹಿ​ಸುವ ಯೋಜನೆ ಇದಾ​ಗಿದ್ದು, ಮೆಟ್ರಿಕ್‌ ನಂತ​ರದ ಹೆಚ್ಚಿನ ವಿದ್ಯಾಭ್ಯಾಸ​ಕ್ಕಾಗಿ ರಾಜ್ಯ​ದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾ​ಲ​ಯ​ಗ​ಳಲ್ಲಿ ಪ್ರವೇಶ ಪಡೆ​ಯುವ ರೈತರ ಮಕ್ಕ​ಳಿಗೆ ಅವರವರ ಕೋರ್ಸ್‌ಗಳಿಗನು​ಗು​ಣ​ವಾಗಿ 2500 ರಿಂದ 11 ಸಾವಿರ ರೂಪಾಯಿವ​ರೆಗೆ ಶಿಷ್ಯ ವೇತನ ನೀಡ​ಲಾ​ಗು​ವುದು. ಇತರ ವಿದ್ಯಾರ್ಥಿ ವೇತ​ನ​ಗ​ಳನ್ನು ಪಡೆ​ಯುತ್ತಿರುವವರೂ ಸಹ ರೈತ ವಿದ್ಯಾ​ನಿಧಿ ಶಿಷ್ಯ ವೇತ​ನ ಪಡೆಯಲು ಅರ್ಹ​ರಾ​ಗಿ​ರು​ತ್ತಾರೆ. ವಿದ್ಯಾ​ರ್ಥಿಯ ತಂದೆ ಅಥವಾ ತಾಯಿಯ ರೈತರ ಗುರು​ತಿನ ಸಂಖ್ಯೆ ಎಂದರೆ ಎಫ್‌ ಐಡಿ ಯನ್ನು ಹೊಂದಿರುವುದು ಅವಶ್ಯಕ.

ಈ ಶಿಷ್ಯ ವೇತನ ಯೋಜ​ನೆ​ಯನ್ನು ಎಂಟರಿಂದ ಹತ್ತನೇ ತರ​ಗತಿ ವ್ಯಾಸಂಗ ಮಾಡು​ತ್ತಿ​ರುವ ರೈತ ಕುಟುಂಬದ ಬಾಲ​ಕಿ​ಯ​ರಿಗೂ ನೀಡುವಂತೆ ಸರ್ಕಾ​ರ​ದಿಂದ ಆದೇಶ ಹೊರ​ಡಿ​ಸ​ಲಾ​ಗಿದೆ. ಈ ಪ್ರಕಾರ, ಪ್ರತಿ ವಿದ್ಯಾರ್ಥಿನಿಗೂ ಎರಡು ಸಾವಿರ ಶಿಷ್ಯ ವೇತನ ದೊರೆ​ಯ​ಲಿದ್ದು, ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷ​ಣಕ್ಕೂ ಪ್ರೋತ್ಸಾಹ ನೀಡ​ಲಾ​ಗು​ತ್ತಿದೆ.

ರೈತರಿಂದಲೇ ಕಮಿಷನ್‌ ಪಡೆಯುತ್ತಿದ್ದಾರೆ ವರ್ತಕರು, ರೈತ ಪರ ಸರ್ಕಾರ ಎಲ್ಲಿದೆ?

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

    

Leave a Reply

Your email address will not be published. Required fields are marked *